Friday, May 11, 2018

ಬಾಲ ಕಾಂಡ ಸರ್ಗ 1 ಸ್ಲೋಕ 5&6

ನನ್ನ ಪ್ರಶ್ನೆಗಳಿಗೆ ಉತ್ತರಿಸಲು ತಾವೊಬ್ಬರೇ ಸಮರ್ಥರು
ಏತದಿಚ್ಛಾಮ್ಯಹಂ ಶ್ರೋತುಂ ಪರಂ ಕೌತೂಹಲಂ ಹಿ ಮೇ  |
ಮಹರ್ಷೇ ತ್ವಂ ಸಮರ್ಥೋಸಿ ಜ್ಞಾತುಮೇವಂವಿಧಂ ನರಮ್  ||||

ತಾತ್ಪರ್ಯ - ಋಷಿಶ್ರೇಷ್ಠರಾದ ನಾರದರೆ ! ಇಂಥ ಗುಣಶಾಲಿಯಾದ ವ್ಯಕ್ತಿಯನ್ನು ತಿಳಿದುಕೊಳ್ಳಲು ನನಗೆ ಕುತೂಹಲ ಹೆಚ್ಚಾಗುತ್ತಿದೆಅಂಥ ವ್ಯಕ್ತಿಯನ್ನು ಸಂಪೂರ್ಣವಾಗಿ ತಾವು ತಿಳಿಯಲು ಸಮರ್ಥರಿದ್ದೀರಿ. ಕೃಪೆಯಿಂದ ನನಗೆ ಅದನ್ನು ತಿಳಿಸಿರಿ.

ವ್ಯಾಖ್ಯಾನ - ಹೇ  ಮಹರ್ಷೇ = ಜ್ಞಾನಿಶ್ರೇಷ್ಠರಾದ ನಾರದರೇ ತ್ವಂ = ತಾವು ಏವಂ ವಿಧಂ ನರಮ್ = ಇಂಥ ಗುಣಗಣಿಯಾದ ಶ್ರೇಷ್ಠಪುರುಷನನ್ನು ಜ್ಞಾತುಂ  = ತಿಳಿಯಲು ಸಮರ್ಥೋಸಿ  = ಸಮರ್ಥರಾಗಿರುವಿರಿ ಅಹಂ = ನಾನು ಏತತ್ = ದಿವ್ಯ ಪುರುಷನ ಗುಣಗಳ ಮಹಿಮೆಯನ್ನು ಶ್ರೋತುಂ = ಕೇಳಲು ಇಚ್ಚಾಮಿ = ಇಚ್ಛಿಸುತ್ತೇನೆ. ಹಿ = ಏಕೆಂದರೆ ಮೇ = ನನಗೆ  ಪರಂ ಕೌತೂಹಲಂ = ಬಹಳವಾದ ಕೂತೂಹಲವಿದೆ. (ಪೂರ್ವಾರ್ಧದಲ್ಲಿ ಕಾವ್ಯಾಲಂಕಾರವನ್ನು ಉತ್ತರಾರ್ಧದಲ್ಲಿ ಕಾವ್ಯಲಿಂಗಾಲಂಕಾರವನ್ನು ತಿಳಿಯಬೇಕು.)

ವಿಶೇಷ ವಿಚಾರ - ಗುರುಗಳೇ ನನ್ನ ಹೃದಯದಲ್ಲಿ ಜಿಜ್ಞಾಸೆ ಬಹುಕಾಲದಿಂದ ಅಡಗಿದೆ. ಉತ್ತಮಜ್ಞಾನಿಗಳ ಬಳಿ ಇದಕ್ಕೆ ಉತ್ತರವನ್ನು ತಿಳಿದುಕೊಳ್ಳಲು ನಿರಂತರ ಹಾತೊರೆಯುತ್ತಿದೆ. ಇಂಥ ಸಂದರ್ಭದಲ್ಲಿ ತಾವಿಲ್ಲಿಗೆ ಆಗಮಿಸಿದ್ದು ನನ್ನ ಸೌಭಾಗ್ಯ. ತಾವು ಚತುರ್ಮುಖಬ್ರಹ್ಮನಿಂದ ಇದೆಲ್ಲವನ್ನೂ ಕೂಡ ಯಥಾರ್ಥವಾಗಿ ತಿಳಿದಿರುವಿರಿ. ಆದ್ದರಿಂದ ರೀತಿಯಾದ ಗುಣಗಳುಳ್ಳ ದಿವ್ಯಪುರುಷನನ್ನು ನನಗೆ ತಿಳಿಸಿಕೊಡಿರಿ. ಅಂಥ ಪುರುಷನನ್ನು ತಿಳಿದುಕೊಂಡು ನನ್ನ ಜೀವನವನ್ನು ಸಾರ್ಥಕವನ್ನಾಗಿ ಭಾವಿಸುತ್ತೇನೆ. ತಾವು ತ್ರಿಕಾಲಜ್ಞಾನಿಗಳಾಗಿರುವಿರಿ. ತಾವೊಬ್ಬರು ಬಿಟ್ಟರೆ ಇಂಥ ದಿವ್ಯಪುರುಷನನ್ನು ಮತ್ತೊಬ್ಬರು ತಿಳಿಯಲಾರರು. ಅಂಥ ಪುರುಷನನ್ನು ನನಗೆ ತಿಳಿಸಿ ಉತ್ತರಿಸಿರಿ.

ಶಿಷ್ಯರಾದ ವಾಲ್ಮೀಕಿಗಳಿಗೆ ಗುರು ನಾರದರಿಂದ ಉಪದೇಶ ಪ್ರಾರಂಭವಾಯಿತು
ಶ್ರುತ್ವಾ  ಚೈತತ್ ತ್ರಿಲೋಕಜ್ಞಾ ವಾಲ್ಮೀಕೇರ್ನಾರದೋ ವಚಃ  |
ಶ್ರೂಯತಾಮಿತಿ ಚಾಮಂತ್ರ್ಯ ಪ್ರಕೃಷ್ಟೋ ವಾಕ್ಯಮಬ್ರವೀತ್  ||||

ತಾತ್ಪರ್ಯ - ಮೂರು ಲೋಕದ ಜ್ಞಾನವನ್ನು ಪಡೆದಿರುವ ನಾರದರಿಗೆ ವಾಲ್ಮೀಕಿ ಋಷಿಗಳ ಮಾತುಗಳನ್ನು ಕೇಳಿ ಬಹಳ ಸಂತೋಷವಾಯಿತು. ವಾಲ್ಮೀಕಿಗಳ ಪ್ರಶ್ನೆಯನ್ನು ಪ್ರಶಂಸೆಮಾಡಿ ಉತ್ತರಿಸುತ್ತೇನೆ ಕೇಳು ಎಂದು ವಾಲ್ಮೀಕಿಗಳನ್ನು ಅಭಿಮುಖ ಮಾಡಿ ಉತ್ತರಿಸಲು ಪ್ರಾರಂಭಿಸಿದರು.

ವ್ಯಾಖ್ಯಾನ - ತ್ರಿಲೋಕಜ್ಞಃ = ಮೂರುಲೋಕಗಳನ್ನು ಬಲ್ಲ, ನಾರದಃ = ನಾರದಮಹರ್ಷಿಗಳು, ವಾಲ್ಮೀಕೇಃ  = ವಾಲ್ಮೀಕಿಗಳ, ಏತತ್ = ಪ್ರಶ್ನೆಯನ್ನು, = ಮನಸ್ಸಿನ ಆಂತರ್ಯವನ್ನು, ಶ್ರುತ್ವಾ = ಕೇಳಿ ತಿಳಿದು, ಪ್ರಹೃಷ್ಟಃ = ಬಹಳ ಸಂತೋಷಪಟ್ಟವರಾಗಿ, ವಚಃ ಶ್ರೂಯತಾಮ್ = ನನ್ನ ಮಾತುಗಳನ್ನು ಕೇಳಿರಿ, ಇತಿ = ಹೀಗೆ, ಆಮಂತ್ರ್ಯ= ಅಭಿಮುಖರನ್ನಾಗಿ ಮಾಡಿ, ವಾಕ್ಯಮ್ = ಉತ್ತರ ನೀಡುವ ಮಾತುಗಳನ್ನು, ಅಬ್ರವೀತ್ = ಸ್ಪಷ್ಟವಾಗಿ ಹೇಳಿದರು.

ವಿಶೇಷ ವಿಚಾರ - ‘ತದ್ವಿಜ್ಞಾನಾರ್ಥಂ ಗುರುಮೇವಾಭಿಗಚ್ಛೇತ್’- ಎಂಬ ಮಾತಿನಂತೆ ಜ್ಞಾನದ ಪ್ರಾಪ್ತಿಗಾಗಿ ಗುರುಗಳ ಬಳಿ ಶಿಷ್ಯನು ತೆರಳಬೇಕು. ಎಂಬುದು ಆಥರ್ವಣೋಪನಿಷತ್ತಿನಲ್ಲಿ ಬರುವ ಆದೇಶ. ಆದರೆ ಇಲ್ಲಿ ಗುರುಗಳಾದ ನಾರದರೇ ಶಿಷ್ಯರಾದ ವಾಲ್ಮೀಕಿಗಳ ಬಳಿ ಧಾವಿಸಿಬಂದಿದ್ದಾರೆ. ಶಿಷ್ಯನಿಗೆ ಜ್ಞಾನೋಪದೇಶದ ಕಾಲವು ಪಕ್ವವಾದಾಗ ಸ್ವತಃ ಗುರುಗಳೇ ಬಂದು ಉಪದೇಶಿಸಿ ಪ್ರೇರಣೆ ಮಾಡುತ್ತಾರೆಂಬ ತತ್ವವನ್ನು  ಇದರಿಂದ ತಿಳಿಯಬೇಕು.

ನಾಸಂವತ್ಸರವಾಸಿನೇ ಪ್ರಬ್ರೂಯಾತ್’ - ಒಂದು ವರ್ಷಗಳ ಕಾಲ ಗರುಗಳ ಸೇವೆ ಮಾಡದವನಿಗೆ ಏನನ್ನೂ ಉಪದೇಶ ಮಾಡಬಾರದು ಎಂಬ ವಾಕ್ಯವಿರುವುದರಿಂದ  ವಾಲ್ಮೀಕಿಗಳಿಗೆ  ನಾರದರು ಕೂಡಲೇ ಹೇಗೆ ಉಪದೇಶಿಸಿದರು ? ಎಂಬ ಪ್ರಶ್ನೆ ಬರುತ್ತದೆ. ಆದರೆ ನಿಯಮವು ಜ್ಯೇಷ್ಠ ಪುತ್ರನನ್ನು  ಬಿಟ್ಟು ಬೇರೆ ಶಿಷ್ಯಂದಿರ ವಿಷಯದಲ್ಲಿ ಮಾತ್ರ ಅನ್ವಯವಾಗುತ್ತದೆ. ಜ್ಯೇಷ್ಠಪುತ್ರನಿಗೆ ಒಂದು ವರ್ಷಗಳ ಕಾಲ ಸೇವೆ ಮಾಡಬೇಕೆಂಬ ನಿಯಮವಿಲ್ಲ. ನಾರದರಿಗೆ ವಾಲ್ಮೀಕಿಗಳು ಜ್ಯೇಷ್ಠಪುತ್ರರೇ ಆಗಿದ್ದಾರೆ. ನಾರದರಿಗೆ ಭೃಗುಋಷಿಗಳು ಸಹೋದರರಾಗಿದ್ದಾರೆ ಭೃಗುಋಷಿಗಳ ಪುತ್ರ ವಾಲ್ಮೀಕಿಗಳಾದ್ದರಿಂದ ತಮಗೂ ಕೂಡ ವಾಲ್ಮೀಕಿಗಳು ಜ್ಯೇಷ್ಠಪುತ್ರರೇ ಆಗುತ್ತಾರೆ. ಆದ್ದರಿಂದ ಶುಶ್ರೂಷೆಯಿಲ್ಲದಿದ್ದರೂ ಪ್ರೀತಿಯಿಂದ ಉಪದೇಶ ಮಾಡಬಹುದು.

ತ್ರಿಲೋಕಜ್ಞಃ’ - ಭೂಲೋಕ ಭುವರ್ಲೋಕ ಸುವರ್ಲೋಕ ಮೂರನ್ನೂ ಸಹ ಸಂಪೂರ್ಣವಾಗಿ ಅರಿತವರು ಅಥವಾ ಬದ್ಧಲೋಕ ನಿತ್ಯ ಅಮುಕ್ತಲೋಕ ನಿತ್ಯಮುಕ್ತಲೋಕ ಮೂರನ್ನು ಕೂಡ  ಅರಿತವರು.

ಶ್ರುತ್ವಾ ’ - ವಾಲ್ಮೀಕಿಗಳ ಮಾತನ್ನು ಕೇಳಿ ಎಂದರ್ಥ. ಶಬ್ದದಿಂದ ಅವರು ಹೇಳದೆ ಮನಸ್ಸಿನಲ್ಲೇ ಉಳಿದ ಪ್ರಶ್ನೆಯ ಅಭಿಪ್ರಾಯವನ್ನೆಲ್ಲಾ  ಸಂಪೂರ್ಣವಾಗಿ ತಿಳಿದು ಎಂಬುದನ್ನು ವಿವಕ್ಷಿಸಬೇಕು.

ಪ್ರಹೃಷ್ಟಃ’ - ಬ್ರಹ್ಮದೇವರು ನಾರದರಿಗೆ ಶತಕೋಟಿ ವಿಸ್ತಾರವಾದ ರಾಮಾಯಣವನ್ನು ಭೂಲೋಕದಲ್ಲಿ ಪ್ರಚಾರ ಮಾಡಲು ಆದೇಶ ಮಾಡಿದ್ದರು. ಅದನ್ನು ವಾಲ್ಮೀಕಿಗಳಿಗೆ ಉಪದೇಶಿಸಲು ನಾರದರೂ ಆಗಮಿಸಿದ್ದರು. ಅದರ ಬಗ್ಗೆಯೇ ವಾಲ್ಮೀಕಿಗಳು ಪ್ರಶ್ನೆ ಮಾಡಿದ್ದರಿಂದ ನಾರದರಿಗೆ ಬಹಳ ಸಂತೋಷವಾಯಿತು.

Balakandam Sarga 1 Verse 5&6

Bala Kandam Verse #5

Ethadhichchamyaham srothum param kauthuhalam hi me |
maharshe thvam samarthopi gnathumevam vidham naram ||

Gist:

Hey Narada! Supreme among sages! I am more than happy to hear such person who possess all the auspicious qualities. You have full knowledge about Him. Please let me know about Him in entirety.

Explanation:

Hey Maharshe = Hey Narada, Supreme among sages
tvam = You
Evam vidham naram = whoever possess such auspicious qualities
gyaathum = Let me know
samarthosi = have full knowledge
aham = Me
Ethath = such supreme person's auspicious qualities
srothum = to listen
ichchami = willing to
hi = why because
me = to me
param kauthoohalam = Will be very happy

(Author has used Kaviya alankara in the first half of the verse; and Kavyalinga alankara in the second half).

Bala Kandam Slokam #6

Sruthva chaithath thrilokagne valmiker naradho vacha: |
srooyathamithi samantrya prakrushto vakyamabraveeth ||

Gist:

Sage Narada, who possess all the knowledge about the three worlds, became very happy on hearing Valmiki's questions. He praised Valmiki's such questions, made him sit across and started answering.

Meaning:

Trilokagna = who possess all the knowledge about the three worlds
Naradha: = Sage Narada
valmike: = Valmiki's
Ethath = such questions
cha = Also whatever there was in his mind
sruthva = heard and understood
prahrushda: = became very happy
vacha: srooyathaam = Listen to me
ithi = thus
Aamanthrya = sat him across
vaakyam = to answer him
abraveeth = started answering.

Explanation:

As per the Atharvana Upanishad verse 'Thathvigyanaartham sa gurumevapi kacheth', to attain knowledge student has to go in search of his Guru. But here Sage Narada who is Guru has come down to his Student on his own. We can understand the inner meaning of this incident as this. Since the time is now ripe for the student to gain his knowledge, Guru himself has come to him. 

'Nasamvathsaravaseene brabrooyaath' - According to this verse, a student has to serve his Guru for atleast one year, to be eligible to get upadesha from Guru. If this the case, we can ask how Sage Narada did upadesha to Valmiki at once? There is an exception to the above rule. That is, the elder son is exempted from this rule. He need not serve as per the above rule. Valmiki is like elder son to Sage Narada. Sage Brugu is brother to Narada and Valmiki is Brugu's son. Hence, even without his serving, Narada did upadesha to Valmiki, with atmost love and affection. 

'Trilokagna' - One who possesses the entire knowledge about Bhuloka, Bhuvarloka and Suvarloka. Or one who possesses the entire knowledge about Baddhaloka, Nithyaloka, Nithyamukthaloka.

'Srutva cha' - On hearing Valmiki's questions. By adding 'cha', we should assume that Sage Narada got the questions which were not even asked by Valmiki, and he answered them too.

'Prahrushta:' - Brahma asked Narada to spread the entire Ramayana in the universe. Narada came to Valmiki's ashrama to give upadasha of Ramayana. Since Valmiki too asked questions about the same subject, Narada became happy.

பாலகாண்டம் சர்க்கம் 1 ஸ்லோகம் 5&6

பாலகாண்டம் சர்க்கம் 1 ஸ்லோகம் #5

ஏததிச்சாம்யஹம் ஸ்ரோதும் பரம் கௌதூஹலம் ஹி மே |
மஹர்ஷே த்வம் சமர்த்தோSபி ஞாதுமேவம்விதம் நரம் ||

பொருள்: 

ரிஷிகளில் சிறந்தவரான நாரதரே! இத்தகைய நற்குணங்களைக் கொண்டவரான மனிதரைப் பற்றி தெரிந்து கொள்வதற்கு எனக்கு மகிழ்ச்சி ஏற்படுகிறது. தாங்கள் அந்த மனிதரைக் குறித்து முழுவதுமாக அறிந்திருக்கிறீர்கள். தயவு செய்து எனக்கு அவரைப் பற்றி தெரிவியுங்கள்.

விளக்கம்:

ஹே மஹர்ஷே = முனிவர்களில் சிறந்தவரான நாரதரே
த்வம் = தாங்கள்
ஏவம் விதம் நரம் = இத்தகைய நற்குணங்களைக் கொண்டவரான சிறந்தவரை
ஞாதும் = தெரிவியுங்கள்
சமர்த்தோSஸி = முழுவதுமாக அறிந்திருக்கிறீர்கள்.
அஹம் = நான்
ஏதத் = இந்த சிறந்த மனிதரின் குணங்களின் சிறப்புகளை
ஸ்ரோதும் = கேட்பதற்கு
இச்சாமி = விருப்பப்படுகிறேன். 
ஹி = ஏனென்றால்
மே = எனக்கு
பரம் கௌதூஹலம் = மிகவும் மகிழ்ச்சியடைந்திருக்கிறேன். 

(ஸ்லோகத்தின் முதற்பாதியில் காவிய அலங்காரத்தையும், பிற்பாதியின் காவியலிங்க அலங்காரத்தையும் பயன்படுத்தியிருக்கிறார் என்று அறியவேண்டும்).

பாலகாண்டம் சர்க்கம் 1 ஸ்லோகம் #6

ஸ்ருத்வா சைதத் த்ரிலோகஞே வால்மீகேர்னாரதோ வச: |
ஸ்ரூயதாமிதி சாமந்த்ர்ய ப்ரக்ருஷ்டோ வாக்யமப்ரவீத் ||

பொருள்:

மூன்று உலகங்களின் ஞானத்தையும் பெற்றிருக்கும் நாரதர், வால்மிகி ரிஷியின் வார்த்தைகளைக் கேட்டு மிகவும் மகிழ்ச்சியடைந்தார். அவரது கேள்விகளை பாராட்டி, பதில் சொல்கிறேன் கேள் என்று சொல்லி, வால்மிகியை தன் எதிரில் அமர்த்தி, பதில் அளிக்கத் துவங்கினார். 

விளக்கம்:

த்ரிலோகக்ஞ = மூன்று உலகங்களையும் அறிந்தவர்
நாரத: = நாரத மகிரிஷி
வால்மிகே: = வால்மிகியின்
ஏதத் = இந்த கேள்வியை
ச = மனதிற்குள் இருந்ததையும்
ஸ்ருத்வா = கேட்டு அறிந்து 
ப்ரஹ்ருஷ்ட: = மிகவும் மகிழ்ச்சியடைந்து
வச: ஸ்ரூயதாம் = என் பேச்சினைக் கேளுங்கள்
இதி = இப்படி
ஆமந்த்ர்ய = எதிரில் அமர்த்தி
வாக்யம் = பதில் அளிக்கும் விதமாக
அப்ரவீத் = தெளிவாகக் கூறினார்

சிறப்புக் கருத்து:

’தத்விக்ஞானார்த்தம் ஸ குருமேவாபி கச்சேத்’ என்பதைப்போல, ஞானத்தை அடைவதற்காக குருவைத் தேடி சிஷ்யன் போகவேண்டும் என்பது அதர்வண உபநிஷத்தில் வரும் வாக்கியம். ஆனால் இங்கு குருகளான நாரதரே சிஷ்யரான வால்மிகியைத் தேடி வந்திருக்கிறார். சிஷ்யனுக்கு ஞானோபதேசம் பெறும் காலம் கனிந்து வந்தால், குரு தானே வந்து, உபதேசிப்பார் என்னும் தத்வத்தை இதிலிருந்து தெரிந்து கொள்ளலாம்.

’நாஸம்வத்ஸரவாசீனே ப்ரப்ரூயாத்’ - ஓராண்டு காலம் குருகளின் சேவை செய்யாதவருக்கு, எந்த உபதேசமும் செய்யக்கூடாது என்ற சொலவடை இருப்பதால், நாரதர் வால்மிகிக்கு எப்படி உடனடியாக உபதேசம் செய்தார் என்ற கேள்வி எழக்கூடும். மூத்த மகனுக்கு மட்டும் இந்த விதியிலிருந்து விலக்கு உண்டு. அதாவது, மூத்த மகன் உபதேசம் பெறுவதற்கு தனது குருவிற்கு ஓராண்டு காலம் சேவை செய்யவேண்டிய அவசியமில்லை. நாரதருக்கு வால்மிகி ரிஷிகள் மூத்த மகனைப் போலவே இருக்கிறார். நாரதருக்கு ப்ருகு ரிஷிகள் சகோதரர். ப்ருகு ரிஷிகளின் மகன் வால்மிகி. ஆக, நாரதருக்கும் வால்மிகி மூத்த மகனாகவே கருதப்படுகிறார். ஆகவே, சேவை இல்லாவிட்டாலும், பாசத்தின் காரணமாக உபதேசம் செய்தார். 

’த்ரிலோகக்ஞ:’ - பூலோக, புவர்லோக, சுவர்லோக என்ற இந்த மூன்று உலகங்களையும் முழுமையாக அறிந்தவர் - அல்லது பத்தலோக, நித்யலோக, நித்யமுக்திலோக என்ற இந்த மூன்று உலகங்களையும் முழுமையாக அறிந்தவர். 

’ஸ்ருத்வா ச’ - வால்மிகியின் பேச்சினைக் கேட்டு என்று பொருள். ’ச’ என்று சொல்வதனால், அவர் கேட்காத / கேட்க நினைத்த கேள்விகளையும்கூட தாமே நினைத்து, அவற்றிற்கும் சரியான பதில் அளித்தார் என்று அறியவேண்டும். 

’ப்ரஹ்ருஷ்ட:’ - சம்பூர்ண ராமாயணத்தை பூலோகத்தில் பரப்புமாறு நாரதரிடம் பிரம்மதேவர் ஆணையிட்டார். அதை வால்மிகிக்கு உபதேசம் செய்வதற்காக நாரதர் அவரது ஆசிரமத்திற்கு வந்தார். வால்மிகியும் அதைப் பற்றியே கேள்விகளைக் கேட்டதால், நாரதர் மிகவும் மகிழ்ச்சியடைந்தார். 

Thursday, May 10, 2018

ಬಾಲ ಕಾಂಡ ಸರ್ಗ ೧ ಸ್ಲೋಕ ೩ & ೪

ಚಾರಿತ್ರೇಣ ಕೋ ಯುಕ್ತಃ ಸರ್ವಭೂತೇಷು ಕೋ ಹಿತಃ  |
ವಿದ್ವಾನ್ ಕಃ ಕಃ ಸಮರ್ಥಶ್ಚ ಕಶ್ಬೈಕಪ್ರಿಯದರ್ಶನಃ ||||

ತಾತ್ಪರ್ಯ - ಶ್ರೇಷ್ಠವಾದ ಕುಲಾಚಾರವುಳ್ಳವನು ಯಾರು? ಎಲ್ಲಾ ಬಗೆಯ ಪ್ರಾಣಿಗಳ ಮಧ್ಯದಲ್ಲಿ  ಯಾವ ಪುರುಷನು ಎಲ್ಲಾ ರೀತಿಯಲ್ಲಿ ಹಿತಕರನಾಗಿದ್ದಾನೆ. ಆತ್ಮತತ್ವ ಹಾಗೂ ಅನಾತ್ಮತತ್ವವನ್ನು ಪೂರ್ಣವಾಗಿ ಬಲ್ಲವನು ಯಾರು? ಐಹಿಕವಾಗಿ ಮತ್ತು ಆಮುಷ್ಮಿಕವಾಗಿ ಎಲ್ಲಾ ರೀತಿಯಲ್ಲೂ ಹಿತವನ್ನು ಉಂಟುಮಾಡುವವನು ಯಾರು

ವ್ಯಾಖ್ಯಾನ - ಚಾರಿತ್ರೇಣ = ಶ್ರೇಷ್ಠವಾದ ಆಚಾರದಿಂದ, ಯುಕ್ತಃ = ಕೂಡಿದವನು, ಕಃ = ಯಾರು? ಸರ್ವಭೂತೇಷು = ಎಲ್ಲಾ ಬಗೆಯ ಪ್ರಾಣಿಗಳ ಮಧ್ಯದಲ್ಲಿ , ಕಃ = ಯಾವ ಪುರುಷನು, ಹಿತಃ = ಎಲ್ಲಾ ರೀತಿಯಲ್ಲಿ ಹಿತಕರನಾಗಿದ್ದಾನೆ, ಕಃ = ಯಾರು, ವಿದ್ವಾನ್ = ಆತ್ಮ ಹಾಗೂ ಅನಾತ್ಮತತ್ವವನ್ನು ಪೂರ್ಣವಾಗಿ ಬಲ್ಲವನು, ಸಮರ್ಥಶ್ಚ = ಯಾರಿಂದಲೂ ಮಾಡಲಾಗದ ಕೆಲಸವನ್ನು ಮಾಡುವುದರಲ್ಲಿ ಸಮರ್ಥನು, ಕಃ = ಯಾರು?,  ಏಕಪ್ರಿಯದರ್ಶನಃ = ಯಾವಾಗ ನೋಡಿದರೂ ಪ್ರಿಯನಾಗಿಯೇ ಕಾಣುವವನು, ಕಃ = ಯಾರು ?

ವಿಶೇಷವಿಚಾರ - ಒಬ್ಬ ವ್ಯಕ್ತಿ ಶ್ರೇಷ್ಠನಾಗಿರಬೇಕಾದರೆ ಅವನಲ್ಲಿರ ಬೇಕಾದ ಎಲ್ಲ ಗುಣಗಳನ್ನು ಸಂಗ್ರಹಿಸಿ, ಪ್ರಶ್ನಿಸುತ್ತಿದ್ದಾರೆ. ಕುಲಸಂಪ್ರದಾಯದಲ್ಲಿ ಬಂದ ಎಲ್ಲಾ ಬಗೆಯ ಆಚಾರಗಳನ್ನು ಪಾಲನೆ ಮಾಡುತ್ತಿರಬೇಕು. ಶುದ್ಧವಾದ ಚಾರಿತ್ರ್ಯವನ್ನು ಅಜೀವನ ಹೊಂದಿರಬೇಕು. ಎಲ್ಲ ಪ್ರಾಣಿಗಳಲ್ಲಿ ದಯೆವುಳ್ಳವನಾಗಿರಬೇಕು. ಅಪರಾಧಿಗಳಲ್ಲಿಯೂ ದ್ವೇಷಭಾವವನ್ನು ಹೊಂದಿರಬಾರದು. ಶತ್ರುಗಳಿಗೂ ಅಹಿತವನ್ನು ಬಯಸಬಾರದು. ಪ್ರಾಣಿಗಳ ಬಗ್ಗೆ ಅನುಕಂಪ ಹೊಂದಿರಬೇಕು. ಮತ್ತೊಬ್ಬರಿಗೆ ಹಿತವನ್ನೇ ಬಯಸಬೇಕು. ಎಲ್ಲ ಶಾಸ್ತ್ರಗಳನ್ನು ತಿಳಿದಿರಬೇಕು. ಆತ್ಮತತ್ವ, ಅನಾತ್ಮತತ್ವಗಳ ಬಗ್ಗೆ ಯಥಾರ್ಥಜ್ಞಾನವಿರಬೇಕು. ಎಲ್ಲ ಕಾರ್ಯಗಳನ್ನು ನಿಭಾಯಿಸುವುದರಲ್ಲಿ ಸಮರ್ಥನಾಗಿರಬೇಕು. ಲೌಕಿಕ ವ್ಯವಹಾರದಲ್ಲಿ ಪ್ರಜಾರಂಜನಾದಿ ಕಾರ್ಯಗಳಲ್ಲಿ ಚಾತುರ್ಯವನ್ನು ಹೊಂದಿರಬೇಕು. ಯಾವಾಗಲೂ ನೋಡುವವರಿಗೆ ನೂತನವಾಗಿ ಕಾಣಿಸುವ ರೂಪವನ್ನು ಹೊಂದಿರಬೇಕು. ಮನ್ಮಥನ ಸೌಂದರ್ಯಕ್ಕಿಂತ ಹೆಚ್ಚಿನ ಸೌಂದರ್ಯವನ್ನು ಹೊಂದಿರಬೇಕು. ಇಂಥವನೇ ಭೂಲೋಕದಲ್ಲಿ ಶ್ರೇಷ್ಠನೆಂದು ಕರೆಸಿಕೊಳ್ಳುತ್ತಾನೆ. ಇಂಥವನು ಈಗ ಯಾರಿದ್ದಾರೆ ? ಎಂಬುದಾಗಿ ನಾರದರ ಬಳಿ ವಾಲ್ಮೀಕಿಗಳು ಪ್ರಶ್ನಿಸುತ್ತಿದ್ದಾರೆ. ಆತ್ಮ ಆತ್ಮತತ್ವ ಹಾಗೂ ಅನಾತ್ಮತತ್ವ ಎರಡನ್ನೂ ಪೂರ್ಣವಾಗಿ ತಿಳಿದವನು ವಿದ್ವಾನ್ ಎಂದು ಕರೆಸಿಕೊಳ್ಳುತ್ತಾನೆ

ಕಃ ಸಮರ್ಥಶ್ಚ’ - ಯಾರಿಂದಲೂ ಮಾಡಲು ಸಾಧ್ಯವಾಗದ ಕೆಲಸವನ್ನು ಮಾಡುವವನು ಸಮರ್ಥ ಎಂದು ಕರೆಯಲ್ಪಡುತ್ತಾರೆ. ‘ಅಘಟಿತಘವನಎಂದು ಇದರ ಅಭಿಪ್ರಾಯ.

ಕಶ್ಬೈಕಪ್ರಿಯದರ್ಶನಃ’ - ಇವನಂತೆ ಲೋಕದಲ್ಲಿ ಬೇರೆ ಯಾರೂ ಸಹ ಪ್ರಿಯವಾದ ದರ್ಶನವುಳ್ಳವರಲ್ಲ. ಒಬ್ಬ ವ್ಯಕ್ತಿಯನ್ನು ನೋಡಿದಾಗ  ಒಮ್ಮೆ ಪ್ರಿಯನಾಗಿ ಕಾಣಿಸುತ್ತಾನೆ. ಮತ್ತೊಮ್ಮೆ ಅಪ್ರಿಯನಾಗಿ ಕಾಣಿಸುತ್ತಾನೆ. ಅಂತಹವನನ್ನು ನೋಡಿದಾಗ ಕೆಲವೊಮ್ಮೆ ಸುಖವಾಗುತ್ತದೆ. ಕೆಲವೊಮ್ಮೆ ದುಃಖವಾಗುತ್ತದೆ. ಆದರೆ ಇವನು ಮಾತ್ರ ಹಾಗಲ್ಲ. ‘ಕ್ಷಣೇ ಕ್ಷಣೇ ಯನ್ನವತಾಮುಪೈತಿ ತದೇವ ರೂಪಂ ರಮಣೀಯತಾಯಾಃಪ್ರತಿಕ್ಷಣದಲ್ಲಿಯೂ ಹೊಸಹೊಸ ಸ್ವರೂಪವು ಕಾಣಿಸಿದರೆ ಅದನ್ನು ರಮಣೀಯ ಎಂದು ಕರೆಯುತ್ತಾರೆ. ಇಂಥ ರಮಣೀಯನಾದವನು ಯಾರು? ಎಂದು ಅಭಿಪ್ರಾಯ
ದೇವದಾನವರು ಯಾರಿಗೆ ಹೆದರುತ್ತಾರೆ ?

ಆತ್ಮವಾನ್ ಕೋ ಜಿತಕ್ರೋಧೋ ದ್ಯುತಿಮಾನ್ ಕೋನಸೂಯಕಃ  |
ಕಸ್ಯ ಬಿಭ್ಯತಿ ದೇವಾಶ್ಚ ಜಾತರೋಷಸ್ಯ ಸಂಯುಗೇ                ||||

ತಾತ್ಪರ್ಯ - ಎಲ್ಲಾ ಇಂದ್ರಿಯಗಳನ್ನು  ತನ್ನ ವಶದಲ್ಲಿ ಇಟ್ಟು ಕೊಂಡಿರುವವನು ಯಾರು? ಕ್ರೋಧವನ್ನೂ ಕೂಡ ತನ್ನ ಅಧೀನದಲ್ಲಿ ಇಟ್ಟುಕೊಂಡಿರುವವನು ಯಾರು? ಸಮಸ್ತಲೋಕವೇ ನೋಡಿ ಮೆಚ್ಚುವಂಥ ದೇಹಕಾಂತಿವುಳ್ಳವನು ಯಾರು? ಮತ್ತೊಬ್ಬರಲ್ಲಿ ಇರುವ ಗುಣವನ್ನು ನೋಡಿ ಅಸೂಯೆ ಪಡದವನು ಯಾರು? ಯಾರಿಗೆ ದುಷ್ಟವಿಚಾರದಲ್ಲಿ ಸಿಟ್ಟು ಬಂದಾಗ ಅಸುರರಷ್ಟೇ ಅಲ್ಲ ದೇವತೆಗಳೂ ಕೂಡ ಹೆದರುತ್ತಾರೋ ಅಂಥವನು ಯಾರು ?

ವ್ಯಾಖ್ಯಾನ - ಆತ್ಮವಾನ್ = . ಅಪ್ರಗಮ್ಯವಾದ ಧೈರ್ಯವುಳ್ಳವನು, ಕಃ = ಯಾರು? . ಇಂದ್ರಿಯಗಳನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡಿರುವ ವ್ಯಕ್ತಿಯು ಯಾರು ? ಜಿತಕ್ರೋಧಃ = ಅರಿಷಡ್ವರ್ಗಗಳನ್ನು ಗೆದ್ದಿರುವವನು, ಕಃ = ಯಾರು ?, ದ್ಯುತಿಮಾನ್ = ಎಲ್ಲರಿಗೂ ನೋಡಬೇಕೆಂಬ ಆಸೆಯನ್ನು ಹುಟ್ಟಿಸುವ ದಿವ್ಯತೇಜಸ್ಸಿನಿಂದ ಕೂಡಿದವನು, ಕಃ = ಯಾರು? ಅನಸೂಯಕಃ = ಗುಣಗಳಲ್ಲಿ ದ್ವೇಷವನ್ನು ಕಾಣದವನು ಯಾರು? ಅಥವಾ ಮತ್ತೊಬ್ಬರ ಐಶ್ವರ್ಯೋನ್ನತಿಯನ್ನು ಕಂಡು ಸಂತೋಷ ಪಡುವವನು, ಕಃ = ಯಾರು? ಕಸ್ಯ= ಯಾವ ವ್ಯಕ್ತಿಯು, ಸಂಯುಗೇ = ಯುದ್ಧಕಾಲದಲ್ಲಿ, ಜಾತರೋಷಸ್ಯ = ದುಷ್ಟವಿಚಾರದಲ್ಲಿ ಕುಪಿತನಾದಾಗದೇವಾಶ್ಚ = ಅಸುರರು ಹಾಗೂ ದೇವತೆಗಳು, ಬಿಭ್ಯತಿ = ಹೆದರುತ್ತಾರೋ?, ಅಂಥ ವ್ಯಕ್ತಿಯು, ಕಃ = ಯಾರು?
ವಿಶೇಷ ವಿಚಾರ - ಆತ್ಮಶಬ್ದಕ್ಕೆ ದೇಹ ಹಾಗೂ ಇಂದ್ರಿಯಗಳು ಎಂದರ್ಥ. ಇವುಗಳನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡಿರುವವನು ಯಾರು? ಅಥವಾ ಆತ್ಮಾ ಜೀವೇ ಧೃತೌ ದೇಹೇ ಸ್ವಭಾವೇ ಪರಮಾತ್ಮನಿಎಂಬ ಕೋಶದಂತೆ ಆತ್ಮವಾನ್ ಎಂದರೆ ಧೈರ್ಯವುಳ್ಳವನು ಎಂದರ್ಥ. ಎಂದೂ ಧೃತಿಗೆಡೆದವನು  ಯಾರು? ಎಂದಭಿಪ್ರಾಯ.

ಜಿತಕ್ರೋಧಃ’ - ಕೋಪವನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡವನು ಜಿತಕ್ರೋಧ ಎಂದು ಕರೆಸಿಕೊಳ್ಳುತ್ತಾನೆ. ಅಪರಾಧಿಗಳ ವಿಷಯದಲ್ಲಿಯೂ ಕೂಡ ದ್ವೇಷಭಾವವನ್ನು ತಾಳದೆ ತಪ್ಪಿಗೆ ಶಿಕ್ಷೆಕೊಡುವ ಬುದ್ಧಿಯುಳ್ಳವನು ಜಿತಕ್ರೋಧನಾಗುತ್ತಾನೆ.

ದ್ಯುತಿಮಾನ್ ಕಃದೇಹದಿಂದ ಹಾಗೂ ಮನಸ್ಸಿನಿಂದ ಶುಭ್ರವಾದ ಕಾಂತಿಯುಳ್ಳವನು ಯಾರು ಸಕಲಲೋಕವೂ ಕೂಡ ಯಾರ ದೇಹಕಾಂತಿಯನ್ನು ನೋಡಿ ಚಕಿತವಾಗುತ್ತದೆಯೋ ಅಂಥವನು ದ್ಯುತಿಮಾನ್ ಎಂದು ಕರೆಸಿಕೊಳ್ಳುತ್ತಾನೆ.

ಕಃ ಅನಸೂಯಕಃ ಗುಣವುಳ್ಳವನಲ್ಲಿ ದ್ವೇಷವನ್ನು ಮಾಡಿದರೆ ಅಸೂಯೆ ಎನ್ನುತ್ತಾರೆ. ಮತ್ತೊಬ್ಬರಲ್ಲಿರುವ ವಿದ್ಯೆ ಐಶ್ಚರ್ಯ ತಪಸ್ಸು ಮೊದಲಾದ ಔನ್ನತ್ಯಕ್ಕೆ ಪೂರಕವಾದ ಗುಣಗಳನ್ನು ನೋಡಿ ಅದರಲ್ಲಿ ದೋಷವನ್ನು  ಹುಡುಕಿ ನಿಂದಿಸುವಿಕೆಯು ಅಸೂಯೆ ಎಂದು ಕರೆಸಿಕೊಳ್ಳುತ್ತದೆ. ಇಂಥ ದೋಷದಿಂದ ಸಂಪೂರ್ಣವಾಗಿ ರಹಿತನಾದವನು ಯಾರು ಎಂದು ಇದರ ಅಭಿಪ್ರಾಯ.

ಕಸ್ಯ ಬಿಭ್ಯತಿ ದೇವಾಶ್ಚ ಜಾತದೋಷಸ್ಯ ಸಂಯುಗೇ’ - ಕಸ್ಯ=ಯಾವ ವ್ಯಕ್ತಿಯು ಸಂಯುಗೇ = ಯುದ್ಧಕಾಲದಲ್ಲಿ ಜಾತದೋಷಸ್ಯ = ದುಷ್ಟವಿಚಾರದಲ್ಲಿ ಕುಪಿತನಾದಾಗ ದೇವಾಶ್ಚ = ಅಸುರರು ಹಾಗೂ ದೇವತೆಗಳು ಬಿಭ್ಯತಿ = ಹೆದರುವರು?

ಭೀತ್ರಾರ್ಥಾನಾಮ್ ಭಯಹೇತುಃಎಂಬ ಸೂತ್ರದಿಂದ ಕಿಮ್ ಶಬ್ದದ ಮೇಲೆ ಪಂಚಮಿವಿಭಕ್ತಿಯು ಪ್ರಾಪ್ತವಾಗಿ ಕಸ್ಯ ಎಂದಾಗಿದೆ. ಆದ್ದರಿಂದ ಇಲ್ಲಿ ಮಾತ್ರ ಕಃ ಎಂದು ಕಸ್ಯ ಎಂದು ಪ್ರಯೋಗಿಸಿದ್ದಾರೆ. ಮೂರು ಶ್ಲೋಕಗಳಲ್ಲಿ ಅತ್ಯಂತ ಸಮೃದ್ಧವಾದ ವಸ್ತುವನ್ನು ವರ್ಣನೆ ಮಾಡಿರುವುದರಿಂದ ಉದಾತ್ತಾಲಂಕಾರವನ್ನು ತಿಳಿಯಬೇಕು.


ಬಾಲ ಕಾಂಡ ಸರ್ಗ 1 ಸ್ಲೋಕ 5&6

ನನ್ನ ಈ ಪ್ರಶ್ನೆಗಳಿಗೆ ಉತ್ತರಿಸಲು ತಾವೊಬ್ಬರೇ ಸಮರ್ಥರು ಏತದಿಚ್ಛಾಮ್ಯಹಂ ಶ್ರೋತುಂ ಪರಂ ಕೌತೂಹಲಂ ಹಿ ಮೇ   | ಮಹರ್ಷೇ ತ್ವಂ ಸಮರ್ಥೋ ಽ ಸಿ ಜ್ಞಾತ...